ಮತ್ತು ಲಂಚ ಇವೆರಡು ವಿಷಯಗಳಷ್ಟು ದೀರ್ಘ ಚರ್ಚಿತ ವಿಷಯ ಕಳೆದ ದಶಕದಲ್ಲಿ ಬೇರಾವುದೂ ಇಲ್ಲವೆನ್ನುವುದು ನನ್ನ ಅನಿಸಿಕೆ. ಜನಸಾಮಾನ್ಯರಿಂದ ಹಿಡಿದು ಜನನಾಯಕರವರೆಗೆ ಎಲ್ಲರೂ ಈ ವಿಷಯವನ್ನು ಒಂದಲ್ಲದಿದ್ದರೆ ಇನ್ನೋದೆಡೆ ಚರ್ಚಿಸುತ್ತಾರೆ. 2011-2012ರಲ್ಲಂತೂ ಅಣ್ಣ ಹಜಾರೆಯವರಿಂದಾಗಿ ಎಲ್ಲರೂ ಭ್ರಷ್ಟಾಚಾರದ ಮರವನ್ನು ಬುಡಸಮೇತ ಉರುಳಿಸುವ ಚಿಂತನೆಗೆ ಶುರು ಹಚ್ಚಿದ್ದರಾದರೂ ಅದು ಕಲ್ಪನೆಗೂ ಮೀರಿದಷ್ಟು ಬೃಹತ್ ಮತ್ತು ಬಲಿಷ್ಟವೂ ಆಗಿದ್ದರಿಂದ ಏನೂ ಆಗದೇ ಹೋಯಿತು. ಭ್ರಷ್ಟಾಚಾರದ ಬಗ್ಗೆ ಚಿಂತನೆಗೆ ಶುರುವಿಟ್ಟರೆ ಅದು ಕೊನೆ ಮೊದಲಿಲ್ಲದ ವಿಚಾರ. ಇತಿಹಾಸದ ಪುಟ ತಿರುಗಿದರೆ ಶತಮಾನದಷ್ಟು ಹಳೆಯ ಉದಾಹರಣೆಗಳು ಬೇಕಷ್ಟು ಸಿಗುತ್ತವೆ. ನನಗನಿಸುತ್ತದೆ ವಿಜ್ಞಾನದ ಬೆಳವಣಿಗೆ ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಸಹಾಯವಿತ್ತಿದೆ ಎಂದು. ವಿಜ್ಞಾನ ಮತ್ತು ವೈಜ್ಞಾನಿಕ ದೃಷ್ಟಿಕೋನಗಳು ಭ್ರೂಣಾವಸ್ಥೆಯಲ್ಲಿರುವಾಗ ದೇವರ ಮೇಲಿನ ಭಯ ಅಥವಾ ಭಕ್ತಿ, ಮರಣಾನಂತರ ಉಂಟಾಗಬಹುದಾದ ದುರ್ಗತಿ(!!)ಯ ಭೀತಿ ಇವು ಯಾರಿಗಾದರೂ ಮಾಡಿರಬಹುದಾದ ವೈಯಕ್ತಿಕ ಲಾಭಕ್ಕಿಂತ ಸಾಮಾಜಿಕ ಲಾಭವೇ ಹೆಚ್ಚು. ಪ್ರತಿಯೊಬ್ಬನೂ ಇಹದಲ್ಲಿ ದೊರೆಯುವ ಶಿಕ್ಷೆಗಿಂತ ಯಾರೂ ಕಾಣದ ಪರದಲ್ಲಿ ದೊರಕಬಹುದಾದ ಶಿಕ್ಷೆಗೆ ಹೆಚ್ಚು ಅಂಜಿದ್ದರಿಂದ ಕಾಪಾಡಲ್ಪಟ್ಟದ್ದು ಸಾಮಾಜಿಕ ಸ್ವಾಸ್ಥ್ಯ ಮತ್ತು ನೈತಿಕ ಮೌಲ್ಯಗಳು. ವಿಜ್ಞಾನ ಬೆಳೆಯುತ್ತಾ ಜನರ ಚಿಂತನಾ ವಿಧಾನ ಹಾಗೂ ಪರಿಧಿ ಬದಲಾಯಿತು ಮಾತ್ರವಲ್ಲ ಬೆಳೆಯಿತು ಕೂಡ. ತತ್ಪರಿಣಾಮ ದೈವ-ದೇವರಲ್ಲಿ, ಮರಣಾನಂತರದ ಪರಲೋಕದಲ್ಲಿನ ಭಯ ದೂರವಾಗುತ್ತಾ ಸಾಗಿತು. ಇದು ಮುಂದಿನ ನೈತಿಕ ಅಧ:ಪತನಕ್ಕೆ ರಹದಾರಿಯಾಯಿತು. ಯಾವಾಗ ಒಂದು ಸಮಾಜದಲ್ಲಿ ನೈತಿಕ ಅಧ:ಪತನವಾಗುತ್ತದೋ ಅದು ಭ್ರಷ್ಟಾಚಾರದಂಥ ವಿಚಾರಗಳಿಗೆ ಎಡೆ ಮಾಡಿಕೊಡುತ್ತದೆ. ಇಂದಿನ ನಮ್ಮ ಸಮಾಜದಲ್ಲಗುತ್ತಿರುವುದೂ ಅದೇ.ಸರಿ ಮತ್ತು ತಪ್ಪುಗಳ ನಡುವಿನ ರೇಖೆ ಅಳಿಸಿದರೆ ಸರ್ವಸ್ವವವೂ ಅಯೋಮಯ.
ಭ್ರಷ್ಟಾಚಾರ ಎಷ್ಟರಮಟ್ಟಿಗೆ ನಮ್ಮ ನರನಾಡಿಗಳಲ್ಲಿ ಸೇರಿಕ್ಕೊಂಡಿದೆಯೆಂದರೆ ಎಷ್ಟೋ ಬಾರಿ ನಾವೇ ಲಂಚ ನೀಡುತ್ತಿದ್ದರೂ ನಮ್ಮ ಅರಿವಿಗೆ ಬಾರದೇ ಹೋಗುತ್ತದೆ. ನನ್ನ ಸುತ್ತಲೂ ಗಮನಿಸಿದರೆ ನನಗಂತೂ ಹಲವು ಉದಾಹರಣೆಗಳು ಸಿಗುತ್ತವೆ. ಯಾವುದೇ ಗ್ರಾಮೀಣ ಪ್ರದೇಶದ ಸರಕಾರೀ ಬಸ್ಸುಗಳಲ್ಲಿ ನೀವು 2-3km ಹೋಗುವ ಪ್ರಸಂಗವಿದೆಯೆಂದಿಟ್ಟುಕ್ಕೊಳ್ಳಿ 100ಕ್ಕೆ 90 ಶೇಕಡಾ ನಿಮಗೆ ಟಿಕೇಟು ದೊರೆಯುವುವ ಅವಕಾಶಗಳಿಲ್ಲ. (ನೀವು ಕೇಳದೆ ಇದ್ದ ಪಕ್ಷದಲ್ಲಿ,) ಇದರಲ್ಲಿ ಹಲವರು ತಪ್ಪನ್ನೇ ಕಾಣರು! ನೀವು ನೀಡುವ ದುಡ್ಡು ನೇರವಾಗಿ ನಿರ್ವಾಹಾಕರ ಜೇಬು ಸೇರುವ ಸಂದರ್ಭವೇ ಜಾಸ್ತಿ(ಪ್ರಾಮಾಣಿಕ ನಿರ್ವಾಹಕರ ಕ್ಷಮೆ ಕೋರುತ್ತ!). ಇಂಥ ಸಂದರ್ಭದಲ್ಲಿ ನನಗೆ ಉಂಟಾಗುವ ಅನುಮಾನವೇನೆಂದರೆ ಟಿಕೇಟು ನೀಡುವುದು ಅವರ ಕರ್ತವ್ಯವೋ ಅಥವಾ ಕೇಳಿ ಪಡೆಯದಿರುವುದು ನಮ್ಮ ತಪ್ಪೇ? ಉತ್ತರ ಅಲ್ಲೇ ಇರುತ್ತದೆ "ಟಿಕೇಟು ಕೀಳಿ ಪಡೆಯಿರಿ".. ಹಾಗಿದ್ದರೆ ನಿರ್ವಾಹಕರು ಇದಕ್ಕೆ ಸ್ವಲ್ಪವೂ ಜವಾಬ್ದಾರರಲ್ಲವೇ?? ದೇವನೇ ಬಲ್ಲ...
ಲಂಚ ನೀಡುವುದು ಎನ್ನುವಾಗ ಒಂದೊಮ್ಮೆ ನನ್ನ ಮನಸ್ಸಿನಲ್ಲಿ ಮೂಡಿದ ಅನುಮಾನಗಳಲ್ಲಿ ಇದೂ ಒಂದು--
ಲಂಚ ನೀಡುವುದು ಕೇವಲ ದುಡ್ಡಿನ ರೂಪದಲ್ಲಿರಬಹುದೆನ್ನುವುದು ಕಲ್ಪನೆ ಮಾತ್ರ. ಉದಾಹರಣೆಗೆ ಸ್ವಾತಂತ್ರ ಪೂರ್ವ 1975ರ ನವೆಂಬರ್ ನಲ್ಲಿ ಕಾರ್ತಿಕ ಶುಕ್ಲ ಪೌರ್ಣಮಿಯಂದು ಕವಿ ಬಂಕಿಮಚಂದ್ರ ವಿರಚಿತ ವಂದೇ ಮಾತರಂ ಆನಂತರದ ಸತತ 60 ವರ್ಷಗಳ ಕಾಲ ಸ್ವಾತಂತ್ರ್ಯದ ರಣಮಂತ್ರವಾಗಿತ್ತು. ಆದರೆ 1936ರ ಕೊಲ್ಕತ್ತಾದ ರಾಷ್ಟ್ರೀಯ ಅಧಿವೇಶನದಲ್ಲಿ ಭಾರತೀಯ ಕಾಂಗ್ರೆಸ್ "ಮುಸ್ಲಿಮರಿಗಾಗಿ" ಎನ್ನುವ ಕಾರಣವನ್ನಿಟ್ಟುಕ್ಕೊಂಡು ವಂದೇ ಮಾತರಂ ವಿಭಜನೆ ಮಾಡಿತು. ಮುಂದೆ ಸ್ವಾತಂತ್ರ್ಯಾನಂತರದ ಚುನಾವಣೆಯ ದೂರದೃಷ್ಟಿಯೇ ಇಂಥ ವಿಭಜನೆಯೊಂದಕ್ಕೆ ಮೂಲ ಕಾರಣವಾಗಿರಬೇಕೆನ್ನುವುದು ನನ್ನ ಅನಿಸಿಕೆ. ಈ ಮೂಲಕ ಆ ಒಂದಿಡೀ ಸಮುದಾಯಕ್ಕೆ ಲಂಚವಿತ್ತನ್ತಾಗಲ್ಲಿಲ್ಲವೇ? ಅಂದಿನ ಆ ಕಾಂಗ್ರೆಸ್ಸಿನ ನಡೆ ಮುಂದೆ ದೇಶ ವಿಭಜನೆಗೂ ಮೂಲವಾಯಿತೆನ್ನುವುದು ಹಲವರ ದೃಷ್ಟಿಕೋನ. ಆದರೆ ಅದ್ಯಾವುದೂ ನಮ್ಮ ರಾಜಕಾರಣಿಗಳ ನಡೆಯನ್ನು ಬದಲಿಸಲಿಲ್ಲ.(ಬದಲಿಸುವುದೂ ಇಲ್ಲವೆನ್ನುವುದು ಖೇದಕರ.). ಇಂದಿಗೂ ಜಾಗತಿಕ ಮಟ್ಟದಲ್ಲಿ ಅನಾಗರಿಕವೆನಿಸುವಂಥ ಜಾತ್ಯಾಧಾರಿತ ಮೀಸಲಾತಿಗಳು ನಮ್ಮಲ್ಲಿವೆ. ಶಿಕ್ಷಣ ಕ್ಷೇತ್ರದಲ್ಲಂತೂ ಇದರಿಂದಾಗುವ ತೊಂದರೆಗಳು ಹಲವಾರು. ಶಿಕ್ಷಣ ಕ್ಷೇತ್ರದ ಮೀಸಲಾತಿಯ ದುಷ್ಪರಿಣಾಮ ದೇಶದ ಮುಂದಿನ ಹಲವು ದಶಕಗಳವರೆಗೂ ಮುಂದುವರಿಯಲಿದೆ. ಈ ಮೀಸಲಾತಿಯ ಮೂಲಕ, ಆಳುವವರು ಶ್ರೀಸಾಮಾನ್ಯನಿಗೆ ಲಂಚ ನೀಡುತ್ತಿದ್ದಾರೆಂದು ಯಾವತ್ತೂ ನಿಮಗನಿಸಿಲ್ಲವೇ? ಒಂದೊಮ್ಮೆ ಆಚರನೆಯಲ್ಲಿದ್ದಂತಹ ಮೇಲ್ವರ್ಗ-ಕೆಳವರ್ಗಗಳ ವ್ಯತ್ಯಾಸವನ್ನು ಇಂದು ಮೀಸಲಾತಿ ನೀಡಿ ಸರಿವಡಿಸುವ ಕ್ರಮ ಸರಿಯಿದೆಯೇನ್ದಾದಲ್ಲಿ ಶತಮಾನಗಳ ಹಿಂದಿನ ಬ್ರಿಟೀಷರ ಧಾಳಿಗೆ ಪ್ರತಿಯಾಗಿ ಇಂದು ಭಾರತ ಬ್ರಿಟನ್ ಮೇಲೆ ಧಾಳಿ ಮಾಡಬೇಕಿದೆ. ಈ ಮೇಲಿನ ವಾಕ್ಯದ ಎರಡನೆಯ ಭಾಗ ಹಾಸ್ಯಾಸ್ಪದ ಎಂದೆನಿಸುವ ನಮಗೆ ಮೊದಲನೆಯದೇಕೆ ಮೌಲ್ಯಯುತವಾಗಿ ಕಾಣುತ್ತದೋ ನಾನರಿಯೆ!!
ಇಷ್ಟೆಲ್ಲದರ ನಂತರವೂ ತಾಯಿ ಭಾರತಿಯ ಆಶೀರ್ವಾದದೊಂದಿಗೆ ಬದುಕುತ್ತಿರುವ ಭಾರತೀಯರ ಜೀವನ ಪ್ರೀತಿ, ಸಹನಾ ಕೌಶಲ ಅನನ್ಯವಾದುದು.
ಮೇಲಿನ ಎಲ್ಲಾ ದೃಷ್ಟಿಕೋನಗಳು ನನ್ನ ವೈಯಕ್ತಿಕವಾದವು. ಜಗತ್ತಿನಲ್ಲೆಷ್ಟು ಮನಸ್ಸುಗಳಿವೆಯೋ ಅಷ್ಟು ಭಾವಗಳೂ, ಅನಿಸಿಕೆಗಳೂ, ಅಭಿಪ್ರಾಯಗಳೂ ಇದೆಯೆನ್ನುವುದು ನನ್ನ ನಂಬಿಕೆ.
ಭ್ರಷ್ಟಾಚಾರ ಎಷ್ಟರಮಟ್ಟಿಗೆ ನಮ್ಮ ನರನಾಡಿಗಳಲ್ಲಿ ಸೇರಿಕ್ಕೊಂಡಿದೆಯೆಂದರೆ ಎಷ್ಟೋ ಬಾರಿ ನಾವೇ ಲಂಚ ನೀಡುತ್ತಿದ್ದರೂ ನಮ್ಮ ಅರಿವಿಗೆ ಬಾರದೇ ಹೋಗುತ್ತದೆ. ನನ್ನ ಸುತ್ತಲೂ ಗಮನಿಸಿದರೆ ನನಗಂತೂ ಹಲವು ಉದಾಹರಣೆಗಳು ಸಿಗುತ್ತವೆ. ಯಾವುದೇ ಗ್ರಾಮೀಣ ಪ್ರದೇಶದ ಸರಕಾರೀ ಬಸ್ಸುಗಳಲ್ಲಿ ನೀವು 2-3km ಹೋಗುವ ಪ್ರಸಂಗವಿದೆಯೆಂದಿಟ್ಟುಕ್ಕೊಳ್ಳಿ 100ಕ್ಕೆ 90 ಶೇಕಡಾ ನಿಮಗೆ ಟಿಕೇಟು ದೊರೆಯುವುವ ಅವಕಾಶಗಳಿಲ್ಲ. (ನೀವು ಕೇಳದೆ ಇದ್ದ ಪಕ್ಷದಲ್ಲಿ,) ಇದರಲ್ಲಿ ಹಲವರು ತಪ್ಪನ್ನೇ ಕಾಣರು! ನೀವು ನೀಡುವ ದುಡ್ಡು ನೇರವಾಗಿ ನಿರ್ವಾಹಾಕರ ಜೇಬು ಸೇರುವ ಸಂದರ್ಭವೇ ಜಾಸ್ತಿ(ಪ್ರಾಮಾಣಿಕ ನಿರ್ವಾಹಕರ ಕ್ಷಮೆ ಕೋರುತ್ತ!). ಇಂಥ ಸಂದರ್ಭದಲ್ಲಿ ನನಗೆ ಉಂಟಾಗುವ ಅನುಮಾನವೇನೆಂದರೆ ಟಿಕೇಟು ನೀಡುವುದು ಅವರ ಕರ್ತವ್ಯವೋ ಅಥವಾ ಕೇಳಿ ಪಡೆಯದಿರುವುದು ನಮ್ಮ ತಪ್ಪೇ? ಉತ್ತರ ಅಲ್ಲೇ ಇರುತ್ತದೆ "ಟಿಕೇಟು ಕೀಳಿ ಪಡೆಯಿರಿ".. ಹಾಗಿದ್ದರೆ ನಿರ್ವಾಹಕರು ಇದಕ್ಕೆ ಸ್ವಲ್ಪವೂ ಜವಾಬ್ದಾರರಲ್ಲವೇ?? ದೇವನೇ ಬಲ್ಲ...
ಲಂಚ ನೀಡುವುದು ಎನ್ನುವಾಗ ಒಂದೊಮ್ಮೆ ನನ್ನ ಮನಸ್ಸಿನಲ್ಲಿ ಮೂಡಿದ ಅನುಮಾನಗಳಲ್ಲಿ ಇದೂ ಒಂದು--
ಲಂಚ ನೀಡುವುದು ಕೇವಲ ದುಡ್ಡಿನ ರೂಪದಲ್ಲಿರಬಹುದೆನ್ನುವುದು ಕಲ್ಪನೆ ಮಾತ್ರ. ಉದಾಹರಣೆಗೆ ಸ್ವಾತಂತ್ರ ಪೂರ್ವ 1975ರ ನವೆಂಬರ್ ನಲ್ಲಿ ಕಾರ್ತಿಕ ಶುಕ್ಲ ಪೌರ್ಣಮಿಯಂದು ಕವಿ ಬಂಕಿಮಚಂದ್ರ ವಿರಚಿತ ವಂದೇ ಮಾತರಂ ಆನಂತರದ ಸತತ 60 ವರ್ಷಗಳ ಕಾಲ ಸ್ವಾತಂತ್ರ್ಯದ ರಣಮಂತ್ರವಾಗಿತ್ತು. ಆದರೆ 1936ರ ಕೊಲ್ಕತ್ತಾದ ರಾಷ್ಟ್ರೀಯ ಅಧಿವೇಶನದಲ್ಲಿ ಭಾರತೀಯ ಕಾಂಗ್ರೆಸ್ "ಮುಸ್ಲಿಮರಿಗಾಗಿ" ಎನ್ನುವ ಕಾರಣವನ್ನಿಟ್ಟುಕ್ಕೊಂಡು ವಂದೇ ಮಾತರಂ ವಿಭಜನೆ ಮಾಡಿತು. ಮುಂದೆ ಸ್ವಾತಂತ್ರ್ಯಾನಂತರದ ಚುನಾವಣೆಯ ದೂರದೃಷ್ಟಿಯೇ ಇಂಥ ವಿಭಜನೆಯೊಂದಕ್ಕೆ ಮೂಲ ಕಾರಣವಾಗಿರಬೇಕೆನ್ನುವುದು ನನ್ನ ಅನಿಸಿಕೆ. ಈ ಮೂಲಕ ಆ ಒಂದಿಡೀ ಸಮುದಾಯಕ್ಕೆ ಲಂಚವಿತ್ತನ್ತಾಗಲ್ಲಿಲ್ಲವೇ? ಅಂದಿನ ಆ ಕಾಂಗ್ರೆಸ್ಸಿನ ನಡೆ ಮುಂದೆ ದೇಶ ವಿಭಜನೆಗೂ ಮೂಲವಾಯಿತೆನ್ನುವುದು ಹಲವರ ದೃಷ್ಟಿಕೋನ. ಆದರೆ ಅದ್ಯಾವುದೂ ನಮ್ಮ ರಾಜಕಾರಣಿಗಳ ನಡೆಯನ್ನು ಬದಲಿಸಲಿಲ್ಲ.(ಬದಲಿಸುವುದೂ ಇಲ್ಲವೆನ್ನುವುದು ಖೇದಕರ.). ಇಂದಿಗೂ ಜಾಗತಿಕ ಮಟ್ಟದಲ್ಲಿ ಅನಾಗರಿಕವೆನಿಸುವಂಥ ಜಾತ್ಯಾಧಾರಿತ ಮೀಸಲಾತಿಗಳು ನಮ್ಮಲ್ಲಿವೆ. ಶಿಕ್ಷಣ ಕ್ಷೇತ್ರದಲ್ಲಂತೂ ಇದರಿಂದಾಗುವ ತೊಂದರೆಗಳು ಹಲವಾರು. ಶಿಕ್ಷಣ ಕ್ಷೇತ್ರದ ಮೀಸಲಾತಿಯ ದುಷ್ಪರಿಣಾಮ ದೇಶದ ಮುಂದಿನ ಹಲವು ದಶಕಗಳವರೆಗೂ ಮುಂದುವರಿಯಲಿದೆ. ಈ ಮೀಸಲಾತಿಯ ಮೂಲಕ, ಆಳುವವರು ಶ್ರೀಸಾಮಾನ್ಯನಿಗೆ ಲಂಚ ನೀಡುತ್ತಿದ್ದಾರೆಂದು ಯಾವತ್ತೂ ನಿಮಗನಿಸಿಲ್ಲವೇ? ಒಂದೊಮ್ಮೆ ಆಚರನೆಯಲ್ಲಿದ್ದಂತಹ ಮೇಲ್ವರ್ಗ-ಕೆಳವರ್ಗಗಳ ವ್ಯತ್ಯಾಸವನ್ನು ಇಂದು ಮೀಸಲಾತಿ ನೀಡಿ ಸರಿವಡಿಸುವ ಕ್ರಮ ಸರಿಯಿದೆಯೇನ್ದಾದಲ್ಲಿ ಶತಮಾನಗಳ ಹಿಂದಿನ ಬ್ರಿಟೀಷರ ಧಾಳಿಗೆ ಪ್ರತಿಯಾಗಿ ಇಂದು ಭಾರತ ಬ್ರಿಟನ್ ಮೇಲೆ ಧಾಳಿ ಮಾಡಬೇಕಿದೆ. ಈ ಮೇಲಿನ ವಾಕ್ಯದ ಎರಡನೆಯ ಭಾಗ ಹಾಸ್ಯಾಸ್ಪದ ಎಂದೆನಿಸುವ ನಮಗೆ ಮೊದಲನೆಯದೇಕೆ ಮೌಲ್ಯಯುತವಾಗಿ ಕಾಣುತ್ತದೋ ನಾನರಿಯೆ!!
ಇಷ್ಟೆಲ್ಲದರ ನಂತರವೂ ತಾಯಿ ಭಾರತಿಯ ಆಶೀರ್ವಾದದೊಂದಿಗೆ ಬದುಕುತ್ತಿರುವ ಭಾರತೀಯರ ಜೀವನ ಪ್ರೀತಿ, ಸಹನಾ ಕೌಶಲ ಅನನ್ಯವಾದುದು.
ಮೇಲಿನ ಎಲ್ಲಾ ದೃಷ್ಟಿಕೋನಗಳು ನನ್ನ ವೈಯಕ್ತಿಕವಾದವು. ಜಗತ್ತಿನಲ್ಲೆಷ್ಟು ಮನಸ್ಸುಗಳಿವೆಯೋ ಅಷ್ಟು ಭಾವಗಳೂ, ಅನಿಸಿಕೆಗಳೂ, ಅಭಿಪ್ರಾಯಗಳೂ ಇದೆಯೆನ್ನುವುದು ನನ್ನ ನಂಬಿಕೆ.
No comments:
Post a Comment